ನೆರವಿಗೆ ಕೇಂದ್ರ ಸದಾ ಸಿದಟಛಿ- ಚಿದಂಬರಮ್
ಬೆಂಗಳೂರು ೨- ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರಕಾರ ಬದಟಛಿವಾಗಿದೆ ಎಂದು ಕೇಂದ್ರ ಗೃಹಸಚಿವ ಪಿ.ಚಿದಂಬರಮ್ ಇಂದಿಲ್ಲಿ ಭರವಸೆ ನೀಡಿದರು. ಬಾಗಲಕೋಟೆ ಜಿಲ್ಹೆಯ ಶಿರಬೆಡಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆಸದರೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ೧೪ ಜಿಲ್ಹೆಗಳಲ್ಲಿ ಉಂಟಾಗಿರುವ ಎಲ್ಲಾಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರಕಾರ ಬದಟಛಿವಾಗಿದೆ ಎಂದರು. ಕೇಂದ್ರದಿಂದ ಬರುವ ಎಲ್ಲಾ ಪರಿಹಾರವನ್ನು ರಾಜ್ಯ ಸರಕಾರ ಸದ್ಭಳಕೆ ಮಾಡಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಬೇಕೆಂದು ಚಿದಂಬರಮ್ ಕರೆ ನೀಡಿದರು. ಇತಿಹಾಸದಲ್ಲಿ ಕಂಡರಿಯದಷ್ಟು ಪ್ರಮಾಣದಲ್ಲಿ ಈ ಉತ್ತರ ಕರ್ನಾಟಕ ಭಾಗದಲ್ಲಿ ಜಲ ಪ್ರಳಯ ಉಂಟಾಗಿದ್ದು, ಇದರ ಪರಿಹಾರ ಕಾರ್ಯವನ್ನು ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಲಿದೆ ಎಂದರು. ಈಗಾಗಲೇ ಮೊದಲ ಹಂತದಲ್ಲಿ ಐನೂರು ಕೋಟಿ ರೂ. ಗಳನ್ನು ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು. ಪ್ರಧಾನ ಡಾ.ಮನಮೋಹನ ಸಿಂಗ್ ಹಾಗೂಸೋನಿಯಾಗಾಂಧಿ ಅವರು ಈ ಪ್ರದೇಶದಲ್ಲಿ ವೈಮಾನಿಕ ಸಮೀಕೆ ನಡೆಸಿದ್ದಾರೆ. ಈ ಸಮಸ್ಯೆ ಬಗ್ಗೆ ಮನ ಗಂಡಿದ್ದು, ಎಲ್ಲಾಪರಿಹಾರ ಒದಗಿಸುವು ದಾಗಿ ಚಿದು ಭರವಸೆ ನೀಡಿದರು.