ಮುಂದಿನ ಸ್ಪೀಕರ್ ಯಾರು?
ಬೆಂಗಳೂರು ೧೨- ವಿಧಾನ ಸಭೆ ಅಧ್ಯಕ್ಷ ಜಗದೀಶ ಶೆಟ್ಟರ್ ಸಿದಟಛಿವಾಗುವದರೊಂದಿಗೆ ಬಳ್ಳಾರಿ ಗಣಿ ರೆಡ್ಡಿಗಳ ನಾಲ್ಕನೆ ಬೇಡಿಕೆಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸ್ತು ಎಂದಿದ್ದಾರೆ. ಇನ್ನೆರಡು ದಿನಗಳಲ್ಲಿ ಜಗದೀಶ ಶೆಟ್ಟರ್ , ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಸಂಪುಟಕ್ಕೆ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಜಗದೀಶ್ ಶೆಟ್ಟರ್ ಹಾಲಿ ವಿಧಾನಸಭಾಧ್ಯಕ್ಷ ರಾಗಿರುವದರಿಂದ ಮೊದಲು ನಿಯಮಾವಳಿಗಳ ಪ್ರಕಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎರಡು ದಿನಗಳಲ್ಲಿ ಅವರುತಮ್ಮ ರಾಜಿನಾಮೆಯನ್ನು ವಿಧಾನ ಸಭೆಯ ಉಪಾಧ್ಯಕ್ಷರಾಗಿರುವ ಕೆ.ಪಿ. ಬೋಪಯ್ಯ ಅವರಿಗೆ ಸಲ್ಲಿಸಿದ್ದಾರೆ. ಒಂದು ವೇಳೆ ಶೆಟ್ಟರ ರಾಜೀನಾಮೆ ವಿಳಂಬವಾದರೆ ನ.೧೮ ರಂದು ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಯ ಬಳಿಕ ರ ಾ ಜಿ ನ ಾ ವ ೆ ು ನೀಡುವರು. ಈ ಶಾಸಕಾಂಗ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಜನಾಥ ಸಿಂಗ್ ಸಹ ಆಗಮಿಸಲಿದ್ದು ಅಂದೇ ಸಮನ್ವಯ ಸಮಿತಿ ರಚನೆ ಹಾಗೂ ಶೆಟ್ಟರ್ ರಾಜೀನಾಮೆ ನೀಡುವ ವಿಷಯವೂ ಪ್ರಸ್ತಾಪವಾಗಲಿದೆ. ಇನ್ನೆರಡು ದಿನಗಳಲ್ಲಿ ಜಗದೀಶ ಶೆಟ್ಟರ್ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. (